Monday, February 1, 2021

ನೆನಪಿನ ದೋಣಿಯಲಿ

ಗೆಳತಿಯೊಬ್ಬಳು WhatsApp ನಲ್ಲಿ ತನ್ನ ಕರಾವಳಿ ಪ್ರವಾಸದ ಚಿತ್ರಗಳು ಹಂಚಿಕೊಂಡಾಗ ಚಿಕ್ಕಂದಿನ ದಿನಗಳು, ನೆನಪುಗಳು ಮರುಕಳಿಸಿದವು.

ಕಳೆದದ್ದು ಕೆಲ ತಿಂಗಳುಗಳಷ್ಟೇ. ಅನುಭವಗಳು ಅನನ್ಯ, ಅಗಣನೀಯ, ಅವಿಸ್ಮರಣೀಯ

ಉಡುಪಿ - ನಾ ಕಂಡ ಚೊಕ್ಕ ಊರು:

ಮೋಹನ ಮುರಳಿಯ ಮಾಧುರ್ಯಕ್ಕೆ ಮನಸೋತು ಆಚಾರ್ಯ ಮಧ್ವರು ಮುರಾರಿ ಮಾಧವನ ಸ್ಥಾಪಿಸಿದ ಮಹಾಪುಣ್ಯಭರಿತ ನಗರಿ
ಕನಕರ ಕರೆಗೆ ಓಗೊಟ್ಟು ಕೃಷ್ಣನು ಕಿಂಡಿಯಲ್ಲಿ ಕಂಡ ಅಚ್ಚರಿಯ ಪ್ರತೀಕ
ಗೀತೆಯ ಸಾರವ ಭವನದಿ ಭದ್ರಪಡಿಸಿ ಗೀತಾಮೃತವ ಹಂಚುವ ಯೋಚನೆ, ವಾಸ್ತುಶಿಲ್ಪ

ಮಲ್ಪೆಯ ಮುದ, ಮರವಂತೆಯ ಮಾಯೆ, ಕಾಪುವಿನ ಕಡಲದೀಪದ ಕರಾಮತ್ತು, St Mary's ಎಂಬ ಕಲ್ಲುಬಂಡೆಯ ದ್ವೀಪದ ನಗರಿ, ಕರಾವಳಿಯ ಬೆವರಿಳಿಸುವ ಹವೆ

ಮನೆಯಲ್ಲಿನ ಉಯ್ಯಾಲೆಯನ್ನು ಮನೆ owner ಮಕ್ಕಳು - ಆತ್ಮೀಯ ಅಕ್ಕ ಅಣ್ಣ ಜೀಕಿದ್ದು, ಮನೆಯಂಗಳದ ತೋಟದಲ್ಲಿ ಅಣಬೆಯ ಬೆಳವಣಿಗೆ ಕಂಡದ್ದು, ಹಾವುಗಳ ಉಭಯಕುಶಲೋಪರಿ ಭೇಟಿಗಳು. 

ತಾತನ ಜೊತೆ ಕೃಷ್ಣ ಮಾಮಿ ದೇಗುಲಕ್ಕೆ ಹೋಗಿ,
ಬರುವಾಗ chocolate ಗೋಸ್ಕರ ಹಠ ಮಾಡಿ, ಜಟಿ-ಜಟಿ ಮಳೆಯಲ್ಲಿ ಸಿಕ್ಕಿಹಾಕಿಕೊಂಡು ತಡವಾದಾಗ, ಕಳೆದು ಹೋದೆವೆಂದು ಮನೆಯಲ್ಲಿ ಆತಂಕ, ನಂತರ ಇಬ್ಬರೂ ಭದ್ರವಾಗಿ ಸೇರಿದ್ದು

ಅಪ್ಪ office ಗೆ ಹೋದಮೇಲೆ ಅಮ್ಮನ ಒತ್ತಾಯಕ್ಕೆ ಹಸಿರು ಬಣ್ಣದ Sketch pen ಅಲ್ಲಿ ಬರೆದು ಕಲಿತ ಕನ್ನಡ-ದೇವನಾಗರಿ ಅಕ್ಷರಗಳು 

ಅಂಬಲಪಾಡಿ ಭೇಟಿ ಕೊಟ್ಟು ಹೊಸ ಸ್ನೇಹಿತರ ಪಡೆದದ್ದು, ಇಂದ್ರಾಳಿಗೆ ಹೋಗುವಾಗ scooter ಅಪ್ಪಳಿಸಿ ಆದ ಮೊದಲ ರಸ್ತೆ ಅಪಘಾತ

Diana, Woodlands ಹೋಟೆಲಿನ ಗಡ್ಬಡ್, ಗೋಳಿ ಬಜೆ ತಿಂದದ್ದು, Dianora box ಟಿವಿಯಲ್ಲಿ ಮೊದಮೊದಲು Aahat, Zee Horror Show ವೀಕ್ಷಿಸಿದ್ದು. ಇನ್ನಷ್ಟು ಕಥೆಗಳು, ಉಪಕಥೆಗಳು!

ಮೂರಕ್ಷರದ ಊರಿನ ಪಟಗಳು ಬಾಲ್ಯದ ಪುಟಗಳ ಮೆಲುಕಿದವು

No comments: